ಶನಿವಾರ, ಜುಲೈ 9, 2016

ನೀ ಪುಣ್ಯಾತ್ಮ



ಎಲ್ಲಾ ಇದ್ದೂ ಏನೂ ಇಲ್ಲದಂಗ ಇದ್ದಿ,
ಏನೂ ಇಲ್ಲಾರ್ದೆನೂ, ಎಲ್ಲಾರಗೂ ಹಂಚಿದಿ
ನೀ ಪುಣ್ಯಾತ್ಮ;

 
ಹಕ್ಕಿ ಮರಿಗೋಳಿಗಿ ಹಾರಲಿಕ್ಕಿ ಮುಗಿಲ ಕೊಟ್ಟಿ,
ನೀ ಕನಸ ಕಂಡು, ನಮಗ ನನಸ ಹಂಚಿದಿ,
ನೀ ಪುಣ್ಯಾತ್ಮ;

ನಿಂದು ಕೂಸಿನಂತಾ ಮನಸ, ಸಿಂಹದಂತಾ ತಾಕತ್,
ದೇಶಕ್ಕೇ ಹಾದಿ ತೋರಿಸಲ್ಲಿಕ್ಕಿ ದೀಪಾ ಹಚ್ಚಿದಿ,
ನೀ ಪುಣ್ಯಾತ್ಮ;

 
ಹೆಚ್ಚಿಗಿ ಮಾತಾಡ್ಲಿಲ್ಲ ಕೆಲ್ಸಾ ಮಾಡೂದು ಬಿಡ್ಲಿಲ್ಲ,
ಫಕೀರನಂಗ ಇದ್ದಿ,  ಹಾಂ ಹಾಂ ಅನ್ನೋದ್ರಾಗ ಹೊಂಟೆ ಬಿಟ್ಟಿ,

ನೀ ಪುಣ್ಯಾತ್ಮ;
 
(ಮನಿಯೋಳಗಿನ ಹಿರಯಾರಂಗ ಇದ್ದ ನಮ್ಮ ಅಬ್ದುಲ್ ಕಲಾಮ್ ರಿಗಿ ನನ್ನ ಅಕ್ಷರ ನಮನ, ಕಲಾಮ್ ರ ಮ್ಯಾಲೊಂದು ಕವನ) 
-ಗುರುರಾಜ ಕುಲಕರ್ಣಿ  (ನಾಡಗೌಡ) ಜುಲೈ ೨೭ ೨೦೧೫
 
        
 


 

ಕಾಮೆಂಟ್‌ಗಳಿಲ್ಲ: